ಬಡುವಂಡ್ರ ಪೂವಯ್ಯ ಆಶಾಕುಮಾರಿ (ಆಂಗ್ಲ:. . ) (ಜನನ: ೧೯೭೦), ಕನ್ನಡ ಭಾಷೆಯಲ್ಲಿ ಬರೆಯುವ ಪ್ರಮುಖ ಸಂಶೋಧನಾ ಲೇಖಕಿ. ವರ್ತಮಾನದ ನೆಲೆಯಲ್ಲಿ ಆಧುನಿಕ ಕನ್ನಡ ಸಾಹಿತ್ಯ, ಜಾನಪದ ಮತ್ತು ಐತಿಹ್ಯಗಳನ್ನು ಬಿಡಿಸಿ ನೋಡುವ ಅವರ ಸಂಶೋಧನಾ ಪುಸ್ತಕಗಳು ಮತ್ತು ಲೇಖನಗಳು ಮಹಿಳಾವಾದದ ಒಳದನಿಯನ್ನೂ ಹೊಂದಿವೆ. == ವೈಯಕ್ತಿಕ ಜೀವನ == ಆಶಾಕುಮಾರಿ, ಕೊಡಗಿನಲ್ಲಿ ಬಡುವಂಡ್ರ ಪೂವಯ್ಯ ಮತ್ತು ಸೀತಮ್ಮ ದಂಪತಿಗಳ ಮಗಳಾಗಿ ೧೯೭೦ರ ಸೆಪ್ಟೆಂಬರ್ ೧೩ರಂದು ಹುಟ್ಟಿದರು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪದವಿ ಓದಿದ ಅವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ನಡೆಸಿ ಪದವಿ ಪಡೆದರು. ಮೈಸೂರು ವಿಶ್ವವಿದ್ಯಾಲಯದ ಮೊದಲ ಅಂಧ ಸಂಶೋಧನಾ ವಿದ್ಯಾರ್ಥಿಗೆ ಮಾರ್ಗದರ್ಶನ ನೀಡಿದ ಆಶಾ, ರಾಜ್ಯದ ಅಂತಹ ಮೂರನೇ ಮಾರ್ಗದರ್ಶಕರಾಗಿದ್ದಾರೆ. == ಕೃತಿಗಳು == ಮಹಿಳಾಕಾವ್ಯದಲ್ಲಿ ಹೆಣ್ಣಿನ ಪರಿಕಲ್ಪನೆ (೨೦೦೩) ಯಾರು ಹೆಚ್ಚು? (೨೦೦೩) ಹೊನ್ನ ಹೊಂಗೆ (೨೦೦೪) ಉಳ್ಳವರು ಶಿವಾಲಯ ಮಾಡುವರು (೨೦೦೪) ನಂಬಿಕೆಗಳು (೨೦೦೪) ಸ್ವಾವಲಂಬನೆ ಅಥವಾ ಸ್ವಉದ್ಯೋಗ (೨೦೦೪) ಸ್ಪಂದನ (೨೦೦೫) ಕಾಸ್ತಾಳಿ (೨೦೦೫) ಬಿ. ಎಂ. ಶ್ರೀಕಂಠಯ್ಯ (೨೦೦೬) ಜಿ. ಎಸ್. ಶಿವರುದ್ರಪ್ಪ (೨೦೦೭) ಕೊಡಗಿನ ಗೌರಮ್ಮ (೨೦೦೭) ಜಿ. ಎಸ್. ಭಟ್ (೨೦೦೭) ಕನ್ನಡ ಸಾಹಿತ್ಯ ಮೊದಲ ಹೆಜ್ಜೆ (೨೦೧೧) ತೀ. ನಂ. ಶ್ರೀಕಂಠಯ್ಯ (೨೦೧೩) ಹೊಳವು (೨೦೧೬) ಕೊಡಗಿನ ಜಾನಪದ ಕುರಿತು ಆಸಕ್ತಿ ಹೊಂದಿರುವ ಆಶಾಕುಮಾರಿ ಅಲ್ಲಿನ ಸ್ಥಳನಾಮ, ಹಬ್ಬಗಳು, ಮದುವೆ ಮತ್ತು ಇತರೆ ಆಚರಣೆಗಳ ಕುರಿತ ವೈಜ್ಞಾನಿಕ ವಿಶ್ಲೇಷಣೆಯುಳ್ಳ ಹಲವಾರು ಲೇಖನಗಳನ್ನು ಪ್ರಕಟಿಸಿದ್ದಾರೆ. ಕೊಡಗಿನ ಸಂಪ್ರದಾಯಗಳು ಬೇಡರ ಕುಣಿತ ಕೃಷಿ ಆಚಾರಣೆಗಳು ಆಡು ಸೋಗೆ ಮುಂತಾದವು. == ಉಲ್ಲೇಖನಗಳು ==